ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ-
ಯನೇರಿ ಸರದ ಸುಯ್ಯನೆ ಶೃತಿಯಲ್ಲಿ
ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ
ನವಿಲು ನೃತ್ಯಕೆ ತಾಳ ಮೇಳೈಸಿ
ವೀಣಾತರಂಗ ತನ್ಮಯಳೆ ತಾಯೆ
ತರವೇನೆ ನಿನಗೀಪರಿಯು?
ಕನ್ನಡ ತಾಯ ತಾಪತ್ರಯಂಗಳಂ
ಎವೆಯಿಕ್ಕದನುದಿನ ನೋಡಿ ನೋಡಿ
ಸಂಗೀತ ಸಾಗರದೀಜುಬಿದ್ದೇಳುತಿಹಿ.
ದೇವಿ, ಸರಸ್ವತಿದೇವಿ, ವಾಗ್ದೇವಿ,
ಬ್ರಹ್ಮದೇವನರಾಣಿ, ವೀಣಾ ಪಾಣಿ,
ಕೀರ್ವಾಣಿ, ಕವಿಶ್ರೇಣಿ ಕಲ್ಯಾಣಿ
ನಿನ್ನ ನಾನನವರತ ಭಜಿಸಲೇಕೆ?
ಸಪ್ತ ಸಾಗರಗಳಭಿಷವಂ ಗೈದು
ಮೂರ್ತ ಮಾರ್ತಾಂಡ ಚಂದ್ರಮತೀಡಿ
ಕಾನನೋದ್ಯಾನ ಕುಸುಮಗಳ ಚೆಲ್ಲಿ
ಸುಪ್ರಭಾತ ಸುಮಂಗಲ ಪಾಡಿ
ಕುಣಿದು ಕೊಂಡಾಡಿ ಪೂಜಿಸಲೇಕೆ?
ಬಾ ಹೊರಗೆ ವೀಣೆಯನಿಟ್ಟು ವಿಶ್ರಾಂತಿ
ಕೊಟ್ಟು, ಕೆಲಕಾಲ ಖಡ್ಗ ಪಾಣಿನಿಯಾಗಿ.
ಮಲ್ಲಗಚ್ಚಿಯ ಹಾಕಿ ಬಾ ಬೆಂಗಾವಲಾಗಿ.
ಮೂಜಗಕೆ ಗಂಡ ಭೇರುಂಡ ಗಾಂಡೀವಿ-
ಪುತ್ರಾಭಿಮನ್ಯು ಚಕ್ರವ್ಯೂಹವನೆ
ಭೇದಿಸಿದ ಬಾಣದ ಶಕ್ತಿ ಬಹುದೆನ್ನ
ಗಲುಗಿಗೆ. ಮೌಢ್ಯ ಕೋಟೆಯ ಕೆಡಹಿ
ನಾಡಗುಡಿ ಕಟ್ಟುವೆನು. ಕನ್ನಡ ತಾಯ
ತಣಿಸುವೆನು. ನುಡಿದೇವಿ ನುಡಿಸಾಗ
ನಿನ್ನ ವೀಣೆಯನು ತೋಷದಾಕಾಶದಲಿ.
*****
Related Post
ಸಣ್ಣ ಕತೆ
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…